ಗುರುತಿಸಬೇಕೋ ಪಕ್ಷಿಜಾತಿ

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು
ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ|

ಅಡವೀಪಲ್ಲೆ ಮಡಿಯ ನೀರು
ಒಡಲ ಒಳಗ ಸಲ್ಲಿಸಿಕೊಂಡು
ಅಡವಿ ತಿರುಗುವವರ ಕೂಡ
ದುಡುಕಿನಿಂದ ಹೋಗುವದು                                 |೧|

ಒಂದು ಕಣ್ಣು ಒಂದು ನಾಲಿಗೆ ಬಾಯಿ ಎರಡು
ಅದರ ದೇಹ ಮೂರು ಕಲ್ಲು ತಿಂಬುವದು
ಮೋಡ ಮುಸುಕು ಗುಡುಗು ಸೇರಿ
ಛಾಯ ಮಿ೦ಚು ಗಗನಕಡರಿ
ಸಾಯಲಾರದ ಹೆಣವ ತಂದು
ಗಾಯ ಮಾಡಿ ಪೋಗುವದು                                  |೨|

ಪಕ್ಕವಿಲ್ಲದೆ ಅಂತರಾಡ್ವದು
ಇದು ಎಂಥಾದು ನೋಡೋ
ಊರ ಅಗಸಿಯೊಳಗ ಇರುವದು
ತಾನು ಹಡೆದ ಮಕ್ಕಳ ಕರೆದು
ಮುಂದಕ್ಕೋಡುವುದು ಗುರುವು ತಾನೇ ಬಲ್ಲ                 |೩|
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಪ್ರಿಲ್ ತಿಂಗಳ ಮೂರು ರಾತ್ರೆಗಳು
Next post ಅಧಿಕಾರ ಕೈನಲ್ಲಿದ್ದಿದ್ದರೆ ರಾಮಮಂದಿರ ಎಂದೋ ಕಟ್ಟುತ್ತಿದ್ದೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys